Description
About the book :
ವಿಧರ್ಮೀ ವಿಧ್ವಂಸಕರಿಂದ ಇನ್ನೇನು ನೆಲಕಚ್ಚಲಿದ್ದ ಸ್ವಧರ್ಮದ ಕೇಸರಿ ಕೀರ್ತಿಪತಾಕೆಯನ್ನು ತನ್ನ ಅಸಾಧಾರಣ ಯುದ್ಧಕೌಶಲ, ಪ್ರತಿಭೆ-ಪೌರುಷಗಳಿಂದ, ದಿಗಂತದೆಡೆಗೆ ಎತ್ತಿಹಿಡಿದ ವಿಜಯ ಸಾಧನೆಯ ಪ್ರತೀಕ ಛತ್ರಪತಿ ಶಿವಾಜಿ ಮಹಾರಾಜರು. ಭಾರತೀಯರಿಗೆ ’ಹಿಂದವೀ ಸ್ವರಾಜ್ಯ’ದ ರಾಷ್ಟ್ರೀಯ ಧ್ಯೇಯಮಂತ್ರ ದೀಕ್ಷೆಯನ್ನು ನೀಡಿದ ಯುಗಪುರುಷ. ಹಿಂದುಸ್ತಾನದ ಎಲ್ಲೆಡೆ ಪಾರತಂತ್ರ್ಯದ ಬಿರುಗಾಳಿ ಭೀಕರವಾಗಿ ಬೀಸುತ್ತಿದ್ದ ಮೃತ್ಯುಸಂಕಟ ಸಮಯದಲ್ಲೂ ವಿವೇಕ, ತಾಳ್ಮೆ, ಎಚ್ಚರದಿಂದ ಸ್ವಾತಂತ್ರ್ಯದ ಪ್ರಾಚೀನ ಹಿಂದೂ ಜೀವನ ಜ್ಯೋತಿಯನ್ನು ನಂದಿಹೋಗದ ಹಾಗೆ ರಕ್ಷಿಸಿದ, ಶಿವಛತ್ರಪತಿಯ ಸುತ್ತ ಹೆಣೆದ ಇತಿಹಾಸದ ಘಟನಾವಳಿಗಳು ಈ ಗ್ರಂಥದಲ್ಲಿ ಕಥನ ಶೈಲಿಯಲ್ಲಿ ಮೇಳವಿಸಿವೆ.
Reviews
There are no reviews yet.